ಪ್ರವೀಣ್ ತೇಜ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟ, ಕನ್ನಡದಲ್ಲಿ ಅವರ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಪ್ರವೀಣ್ ಕನ್ನಡ ಚಲನಚಿತ್ರೋದ್ಯಮದಲ್ಲಿ ಜಾಲಿ ಡೇಸ್ (2009) ಚಿತ್ರದ ಮೂಲಕ ತಮ್ಮ ಮೊದಲ ಚಲನಚಿತ್ರವನ್ನು ಮಾಡಿದರು. ಅವರು ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ (2016) ಮತ್ತು ಮುಂದಿನ ನಿಲ್ದಾಣ (2019) ದಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. == ಆರಂಭಿಕ ಜೀವನ == ಪ್ರವೀಣ್ ತೇಜ್ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ 3 ಡಿಸೆಂಬರ್ 1984 ರಂದು ಲಕ್ಷ್ಮಣ ಗೌಡ ಮತ್ತು ಪದ್ಮಾವತಿ ದಂಪತಿಗೆ ಜನಿಸಿದರು. == ವೃತ್ತಿ == ಅವರು ಜಾಲಿ ಡೇಸ್ (2009) ಚಲನಚಿತ್ರದೊಂದಿಗೆ ಕನ್ನಡ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು, ಅಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಒಂದಾದ "ಪ್ರವೀಣ" ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸುವರ್ಣ ಟಿವಿಯಲ್ಲಿ ಪ್ರಸಾರವಾದ ಪ್ಯಾಟೆ ಮಂದಿ ಕಾಡಿಗೆ ಬಂದ್ರು (೨೦೧೦) ಕನ್ನಡ ರಿಯಾಲಿಟಿ ಶೋನ ಭಾಗವಾಗಿದ್ದರು. ಅವರು ಟಿವಿ ಧಾರಾವಾಹಿ ರಾಧಾ ಕಲ್ಯಾಣ (2012)ದಲ್ಲಿ ನಟಿಸಿದರು, ಇದು ಜೀ ಕನ್ನಡದಲ್ಲಿ ಪ್ರಸಾರವಾಯಿತು. ಪ್ರವೀಣ್ ನಂತರ ಅನ್ನಿ ಸಂತೋಷ್ ಗೌಡ ನಿರ್ದೇಶನದ ಆಂತರ್ಯ (2013) ಚಿತ್ರದಲ್ಲಿ ಕೃಷ್ಣನಾಗಿ ನಟಿಸಿದರು. ಅವರು ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ (2016) ಚಿತ್ರದಲ್ಲಿ ಕುಶ್ ಪಾತ್ರವನ್ನು ನಿರ್ವಹಿಸಿದ್ದಾರೆ, ಇದು ಕನ್ನಡದ ಹಿಟ್ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿಯ ಮುಂದುವರಿದ ಭಾಗವಾಗಿದೆ. ಅವರ ಇತರ ಚಿತ್ರಗಳು 5ಜಿ (2017), ಕುಚಿಕು ಕುಚಿಕು (2018). ಅವರ ಮುಂದಿನ ಚಲನಚಿತ್ರವು 2018 ರಲ್ಲಿ ಕ್ರೈಮ್ ಥ್ರಿಲ್ಲರ್ ಚೂರಿಕಟ್ಟೆ ಆಗಿತ್ತು. ನಂತರ ಅವರು ಸ್ಟ್ರೈಕರ್ (2019) ಚಿತ್ರದಲ್ಲಿ ನಟಿಸಿದರು. ಅವರ ಮುಂದಿನ ಚಿತ್ರ, ಮುಂದಿನ ನಿಲ್ದಾಣ (2019) ಹಿಟ್ ಆಗಿತ್ತು. == ವೈಯಕ್ತಿಕ ಜೀವನ == ಪ್ರವೀಣ್ 2014 ರಲ್ಲಿ ದೀಪಿಕಾ ನಜ್ರೆ ಅವರನ್ನು ವಿವಾಹವಾದರು,ಇವರಿಗೆ ಒಬ್ಬ ಮಗನಿದ್ದಾನೆ. == ಫಿಲ್ಮೋಗ್ರಫಿ == === ದೂರದರ್ಶನ === == ಉಲ್ಲೇಖಗಳು ==